Friday 5 February 2016

ಉನ್ಮತ್ತೆ

ಅದುಮಿಡುವುದು 
ಒಂಥರದ 

ಅಗತ್ಯ? ನಾನರೆ 
ಹಣ್ಣಾದ ಹಣ್ಣು 

ನೀ ಹುಲಿ 
ನಿನ್ನುಗುರು ನೀನೇ ಕಚ್ಚುತ್ತ 

ನಾವ್ಮದುವೆಯಾದ ದಿನ 
ಮರಗಳದುರಿದವು, ಅವಕೆ 

ಮೈಮೇಲೆ ದೆವ್ವ ಬಂದಂತೆ - 
ದಯೆಯಿರಲೆನ್ನ ಮೇಲೆ, ಎಂದೆ ನೀ.

(ಮೂಲ: 'Frenzied': ೨೦೧೫ನೇ ಸಾಲಿನ ಟಿ ಎಸ್ ಏಲಿಯಟ್ ಪ್ರಶಸ್ತಿ ಪಡೆದ ಸಾರಾ ಹೋವ್ ಬರೆದ ಕವಿತೆ) 

(`ಅನಿವಾಸಿ`ಯಲ್ಲಿ ಮೊದಲು ಪ್ರಕಟಿತ)